"ಬಾಬರಿ ಮಸೀದಿ ದ್ವಂಸ ಸಂದರ್ಭ ಹಿಂದೂಗಳು 'ತಾಲಿಬಾನಿ'ಗಳಂತೆ ವರ್ತಿಸಿದ್ದರು"
ಸುಪ್ರೀಂ ಕೋರ್ಟ್ ಗೆ ತಿಳಿಸಿದ ವಕೀಲ
ಹೊಸದಿಲ್ಲಿ, ಜು.20: ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6ರಂದು ನಡೆದ ಬಾಬರಿ ಮಸೀದಿ ದ್ವಂಸದ ಸಂದರ್ಭ ಹಿಂದೂಗಳು ತಾಲಿಬಾನಿಗಳಂತೆ ವರ್ತಿಸಿದ್ದರು ಎಂದು ಮುಸ್ಲಿಮರ ಪಕ್ಷದ ವಕೀಲ ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ಅಯೋಧ್ಯೆ ಪ್ರಕರಣದ ವಿಚಾರಣೆ ಸಂದರ್ಭ ಅವರು ಈ ಮಾತುಗಳನ್ನು ಹೇಳಿದರು. "ಆ ದಿನ ಹಿಂದೂಗಳು ತಾಲಿಬಾನಿಗಳಂತೆ ವರ್ತಿಸಿದರು. ಡಿಸೆಂಬರ್ 6ರಂದು ನಡೆದಿರುವುದು ಭಯೋತ್ಪಾದಕ ಕೃತ್ಯ" ಎಂದವರು ಅಭಿಪ್ರಾಯಿಸಿದರು.
ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸವನ್ನು ಅವರು ಈ ಹಿಂದೆ ಅಫ್ಘಾನಿಸ್ತಾನದ ಬಮಿಯಾನ್ ನಲ್ಲಿ ನಡೆದ ಬುದ್ಧ ಪ್ರತಿಮೆಯ ಧ್ವಂಸಕ್ಕೆ ಹೋಲಿಸಿದ್ದರು.
Next Story