ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರಕಾರ ವಿಫಲ: ಬಾಬಾ ರಾಮ್ ದೇವ್
ಭೋಪಾಲ್, ಜು.20: ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರವನ್ನು ಯೋಗಗುರು ಬಾಬಾ ರಾಮ್ ದೇವ್ ಟೀಕಿಸಿದರು.
"ನಿರುದ್ಯೋಗ ಸಮಸ್ಯೆ ದೇಶದಾದ್ಯಂತ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರಗಳು ವಿಫಲವಾಗಿದೆ" ಎಂದು ರಾಮ್ ದೇವ್ ಪತ್ರಕರ್ತರಿಗೆ ತಿಳಿಸಿದರು.
"ನಿರುದ್ಯೋಗ, ಬಡತನ, ಹಸಿವು ಹಾಗು ಕೊರತೆ ಭಾರತದ ಪಾಲಿಗೆ ನಾಚಿಕೆಯ ವಿಷಯಗಳಾಗಿವೆ. ಇದೆಲ್ಲವನ್ನೂ ಹೋಗಲಾಡಿಸುವುದು ನನ್ನ ಉದ್ದೇಶ. ಕಳೆದ ತಿಂಗಳು ಪತಂಜಲಿ ಗ್ರೂಪ್ 11 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಯುವಕರಿಗೆ ಉದ್ಯೋಗ ನೀಡಲಾಗುವುದು" ಎಂದವರು ಹೇಳಿದರು.
Next Story