ಗೋವು 'ರಾಷ್ಟ್ರಮಾತೆ' ಎಂದು ಘೋಷಿಸುವವರೆಗೆ ಗುಂಪು ಹತ್ಯೆಗಳು ನಿಲ್ಲುವುದಿಲ್ಲ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ
ಹೈದರಾಬಾದ್, ಜು.24: ಗೋವನ್ನು 'ರಾಷ್ಟ್ರಮಾತೆ'ಯಾಗಿ ಘೋಷಿಸುವವರೆಗೆ ಗೋರಕ್ಷಣೆಯ ಹೆಸರಿನ ಗುಂಪು ಹತ್ಯೆಗಳು ನಿಲ್ಲುವುದಿಲ್ಲ ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ವಿಚಾರದಲ್ಲಿ ರಕ್ತಪಾತವನ್ನು ತಾನು ಬಯಸುವದಿಲ್ಲ. ಆದರೆ ಗೋಹತ್ಯೆ ನಿಲ್ಲಲೇಬೇಕು. ಗೋವನ್ನು 'ರಾಷ್ಟ್ರಮಾತೆ'ಯಾಗಿ ಘೋಷಿಸಬೇಕು ಎಂದು ರಾಜಾ ಸಿಂಗ್ ವಿಡಿಯೋವೊಂದರಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಲೋಕಸಭೆಯಲ್ಲೂ ಧ್ವನಿಯೆತ್ತಬೇಕು ಎಂದು ಅವರು ಇತರ ಶಾಸಕರನ್ನೂ ಆಗ್ರಹಿಸಿದ್ದಾರೆ. "ಗೋವು ರಾಷ್ಟ್ರಮಾತೆ ಎಂದು ಘೋಷಣೆಯಾಗುವವರೆಗೆ ಗೋರಕ್ಷಣೆಗಾಗಿನ ಯುದ್ಧ ನಿಲ್ಲುವುದಿಲ್ಲ ಎಂದು ನನಗನಿಸುತ್ತದೆ. ಗೋರಕ್ಷಕರನ್ನು ಜೈಲಿಗೆ ಹಾಕಿದರೂ ಅವರಿಗೆ ಗುಂಡು ಹೊಡೆದರೂ ಇದು ನಿಲ್ಲುವುದಿಲ್ಲ" ಎಂದವರು ವಿಡಿಯೋದಲ್ಲಿ ಹೇಳಿದ್ದಾರೆ.
Next Story