ಹಿಂದೂ ಯುವತಿಯನ್ನು ಮದುವೆಯಾಗಲು ಮುಂದಾದ ಮುಸ್ಲಿಂ ಯುವಕನಿಗೆ ದುಷ್ಕರ್ಮಿಗಳಿಂದ ಹಲ್ಲೆ
ಗಾಝಿಯಾಬಾದ್, ಜು.24: ಹಿಂದೂ ಯುವತಿಯೊಬ್ಬಳನ್ನು ಮದುವೆಯಾಗಲು ಗಾಝಿಯಾಬಾದ್ ಕೋರ್ಟ್ ಗೆ ತೆರಳಿದ್ದ ಮುಸ್ಲಿಂ ಯುವಕನೊಬ್ಬನ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಹಿಂದೂ ಯುವತಿಯ ಜೊತೆಗೆ ಮದುವೆ ರಿಜಿಸ್ಟರ್ ಮಾಡಿಕೊಳ್ಳುವುದಕ್ಕಾಗಿ ಯುವಕ ಕೋರ್ಟ್ ಗೆ ತೆರಳಿದ್ದ. ಈ ಸಂದರ್ಭ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಪಾಂಡೆ ಹೇಳಿದ್ದಾರೆ.
ಯುವಕನನ್ನು ಸುತ್ತುವರಿದ 6-7 ಮಂದಿಯಿದ್ದ ಗುಂಪು ಆತನನ್ನು ಎಳೆದಾಡಿಕೊಂಡು ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರು ಬರುವವರೆಗೂ ಗುಂಪಿನಲ್ಲಿದ್ದವರು ಯುವಕನನ್ನು ಥಳಿಸಿದ್ದಾರೆ. ಈ ಬಗ್ಗೆ ಪ್ರಕರಣವೊಂದು ದಾಖಲಾಗಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ.
Next Story