ಕರುಣಾನಿಧಿ ಆರೋಗ್ಯ ಸ್ಥಿರ
ಚೆನ್ನೈ, ಜು.29: ಇಲ್ಲಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕ ವಿಭಾಗದಲ್ಲಿ ಡಾ.ಅರವಿಂದ್ ಸೆಲ್ವರಾಜ್ ನೇತೃತ್ವದ ವೈದರ ತಂಡ ಚಿಕಿತ್ಸೆ ಮುಂದುವರಿಸಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರವಿವಾರ ಮಧ್ಯಾಹ್ನ 12 ಗಂಟೆಗೆ ಚೆನ್ನೈಗೆ ಭೇಟಿ ನೀಡಿ ಮಾಜಿ ಸಿಎಂ ಕರುಣಾನಿಧಿ ಆರೋಗ್ಯದ ಬಗ್ಗೆ ವಿಚಾರಿಸಲಿದ್ದಾರೆ.
ಚೆನ್ನೈನಲ್ಲಿ ಪೊಲೀಸರ ಸರ್ಪಗಾವಲು ಕಂಡು ಬಂದಿದ್ದು, ಮುನ್ನಚ್ಚೆರಿಕೆ ಕ್ರಮವಾಗಿ 2,000 ಪೊಲೀಸರನ್ನು ನಿಯೋಜಿಸಲಾಗಿದೆ
Next Story