ಟಿಟಿವಿ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಚೆನ್ನೈ, ಜು.29: ಮಾಜಿ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರ ಚೆನ್ನೈ ನಿವಾಸದ ಹೊರಭಾಗದಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ.
ಎಎಂಎಂಕೆಯಿಂದ ಇತ್ತೀಚೆಗೆ ವಜಾಗೊಳಿಸಲ್ಪಟ್ಟ ಬುಲೆಟ್ ಪರಿಮಳಂ ಎಂಬಾತ ಈ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ಪಕ್ಷದ ಕ್ರಮದಿಂದ ಕೋಪಗೊಂಡ ಪರಿಮಳಂ ತನ್ನ ಚಾಲಕನ ಜೊತೆ ಪೆಟ್ರೋಲ್ ಬಾಂಬ್ ನಡೆಸಿದ್ದಾನೆ” ಎಂದು ಪೊಲೀಸ್ ತಿಳಿಸಿದ್ದಾರೆ.
Next Story