ಬಿಜೆಪಿ ಶಾಸಕನ ಕಾರಿಗೆ ಕಲ್ಲು ತೂರಾಟ
ಮಥುರಾ(ಉ.ಪ್ರ),ಆ.6: ಇಲ್ಲಿಯ ಬಿಜೆಪಿ ಶಾಸಕ ಪೂರ್ಣ ಪ್ರಕಾಶ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ರವಿವಾರ ಕಲ್ಲು ತೂರಾಟ ನಡೆಸಿದ್ದು,ಅವರು ಗಾಯಗೊಂಡಿದ್ದಾರೆ.
ಜಮುನಾಪುರ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು,ದೊಡ್ಡ ಕಲ್ಲೊಂದು ವಿಂಡ್ಶೀಲ್ಡ್ ಭೇದಿಸಿ ಕಾರಿನೊಳಗೆ ನುಗ್ಗಿತ್ತು. ಶಾಸಕರ ಸೂಚನೆಯಂತೆ ಚಾಲಕ ಕಾರಿನ ವೇಗವನ್ನು ಹೆಚ್ಚಿಸಿ ಜನನಿಬಿಡ ಸ್ಥಳವನ್ನು ತಲುಪಿ ನೆರವಿಗಾಗಿ ಕೋರಿದ್ದ. ಇದು ತನ್ನ ಮೇಲೆ ನಡೆದಿರುವ ಮೂರನೇ ದಾಳಿಯಾಗಿದೆ. ತನ್ನನ್ನು ಉಳಿಸಿದ್ದಕ್ಕಾಗಿ ದೇವರಿಗೆ ಆಭಾರಿಯಾಗಿದ್ದೇನೆ ಎಂದು ಪ್ರಕಾಶ ಹೇಳಿದರು.
ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story