ಡಿ.ಜಿ. ವಂಝಾರ, ಎನ್.ಕೆ. ಅಮೀನ್ ಖುಲಾಸೆ ಅರ್ಜಿ ತಿರಸ್ಕರಿಸಿದ ಸಿಬಿಐ ನ್ಯಾಯಾಲಯ
ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣ
ಹೊಸದಿಲ್ಲಿ, ಆ.7: ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದ ಆರೋಪಿಗಳಾದ ಮಾಜಿ ಪೊಲೀಸ್ ಅಧಿಕಾರಿಗಳಾದ ಡಿ.ಜಿ. ವಂಝಾರ ಮತ್ತು ಎನ್.ಕೆ. ಅಮೀನ್ ಅವರ ಅರ್ಜಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಪ್ರಕರಣದಲ್ಲಿ ತಮ್ಮನ್ನು ಆರೋಪಮುಕ್ತಗೊಳಿಸುವಂತೆ ಈ ಇಬ್ಬರು ಅರ್ಜಿ ಸಲ್ಲಿಸಿದ್ದರು.
ಕೇಂದ್ರ ಏಜೆನ್ಸಿ ಸಲ್ಲಿಸಿರುವ ಚಾರ್ಜ್ ಶೀಟ್ ಸುಳ್ಳುಗಳಿಂದ ಕೂಡಿದೆ ಎಂದು ವಂಝಾರ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಸಾಕ್ಷಿಗಳ ಹೇಳಿಕೆಗಳು ‘ಸಂಶಯಾಸ್ಪದ’ ಎಂದೂ ಅವರು ಆರೋಪಿಸಿದ್ದರು.
ವಂಝಾರರ ಅರ್ಜಿಯನ್ನು ವಿರೋಧಿಸಿದ್ದ ಇಶ್ರತ್ ರ ತಾಯಿ , “ಉನ್ನತ ಪೊಲೀಸ್ ಅಧಿಕಾರಿಗಳು ಹಾಗು ಅಧಿಕಾರವುಳ್ಳವರ ಪಿತೂರಿಯಿಂದ ನನ್ನ ಪುತ್ರಿಯನ್ನು ಕೊಲ್ಲಲಾಗಿದೆ” ಎಂದು ಕೋರ್ಟ್ ಗೆ ತಿಳಿಸಿದ್ದರು.
Next Story