ದಾವೂದ್ನಿಂದ ಶಾಸಕನಿಗೆ ಜೀವ ಬೆದರಿಕೆ
ಲಕ್ನೋ,ಆ.12: ಭೂಗತ ಪಾತಕಿ ದಾವೂದ್ ಇಬ್ರಾಹೀಂನಿಂದ ತನಗೆ ಜೀವ ಬೆದರಿಕೆಯಿದೆಯೆಂದು ಬಲಿಯಾ ಜಿಲ್ಲೆಯ ರಸ್ರಾದ ಬಿಎಸ್ಪಿ ಶಾಸಕ ಉಮಾಶಂಕರ ಸಿಂಗ್ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಆ.6 ಮತ್ತು 8ರಂದು ಎಸ್ಎಂಎಸ್ ಮತ್ತು ಇ-ಮೇಲ್ಗಳು ದಾವೂದ್ ಹೆಸರಿನಲ್ಲಿ ಬಂದಿದ್ದು,ಒಂದು ಕೋಟಿ ರೂ.ಗಳನ್ನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು,ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
Next Story