ಕೇರಳದಲ್ಲಿ ಭಾರೀ ಮಳೆಯಿಂದಾಗಿ 167 ಮಂದಿ ಮೃತಪಟ್ಟದ್ದಾರೆ: ಪಿಣರಾಯಿ ವಿಜಯನ್
ತಿರುವನಂತಪುರ, ಆ.17: ಕೇರಳದಲ್ಲಿ ಭಾರೀ ಮಳೆಯಿಂದಾಗಿ ಮೃತಪಟ್ಟವರ ಸಂಖ್ಯೆ 167ಕ್ಕೆ ಏರಿದೆ ಎಂದು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಳೆ, ನೆರೆ ಹಾವಳಿಯಿಂದಾಗಿ ರಾಜ್ಯಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಪರ್ಕ ಬಹುತೇಕ ಕಡಿದು ಹೋಗಿದೆ, ರೈಲು , ವಿಮಾನ ಯಾನ ರದ್ದಾಗಿದೆ.
ಮಳೆ , ಭೂಕುಸಿತದಿಂದಾಗಿ 11 ಮಂದಿ ನಾಪತ್ತೆಯಾಗಿದ್ದಾರೆ, 41 ಮಂದಿ ಗಾಯಗೊಂಡಿದ್ದಾರೆ. 3393 ಹೆಕ್ಟರ್ ಪ್ರದೇಶದ ಕೃಷಿ ನಾಶವಾಗಿದೆ. 2,857 ಮನೆಗಳು ಹಾನಿಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ತೊಂದರೆಗೊಳದವರ ಪೈಕಿ 1,65, 538 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ 100 ಕೋಟಿ ರೂ. ಪ್ರಕಟಿಸಿದ್ದಾರೆ ಎಂದು ತಿಳಿಸಿದ್ದಾರೆ.
Next Story