ಒಂದು ತಿಂಗಳ ಸಂಬಳವನ್ನು ಪರಿಹಾರ ನಿಧಿಗೆ ನೀಡಲಿರುವ ಆಪ್ ಶಾಸಕರು, ಸಂಸದರು
ಪ್ರವಾಹಕ್ಕೆ ತತ್ತರಿಸಿದ ಕೇರಳ
ಹೊಸದಿಲ್ಲಿ, ಆ.18: ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ನೆರವಾಗುವ ದೃಷ್ಟಿಯಿಂದ ಎಲ್ಲಾ ಆಮ್ ಆದ್ಮಿ ಶಾಸಕರು, ಸಚಿವರು ಮತ್ತು ಸಂಸದರು ತಮ್ಮ ಒಂದು ತಿಂಗಳ ಸಂಬಳವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, “ಕೇರಳಕ್ಕಾಗಿ ಎಲ್ಲಾ ಆಪ್ ಶಾಸಕರು, ಸಂಸದರು ಹಾಗು ಸಚಿವರು ಒಂದು ತಿಂಗಳ ಸಂಬಳವನ್ನು ನೀಡಲಿದ್ದಾರೆ” ಎಂದಿದ್ದಾರೆ.
ದಿಲ್ಲಿ ಸರಕಾರವು ಕೇರಳಕ್ಕೆ 10 ಕೋಟಿ ರೂ.ಗಳನ್ನು ನೀಡಲಿದೆ ಎಂದು ನಿನ್ನೆ ಕೇಜ್ರಿವಾಲ್ ಹೇಳಿದ್ದರು.
Next Story