ಅಂದು ಬ್ರಿಟಿಷರಿಗಾಗಿ ಸೇವೆ ಸಲ್ಲಿಸಿದ್ದವರು ಇಂದು ಅಂಬಾನಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ: ಕನ್ಹಯ್ಯ ಕುಮಾರ್
ಮುಂಬೈ, ಆ.23: ಅಂದು ಬ್ರಿಟಿಷರಿಗಾಗಿ ಸೇವೆ ಸಲ್ಲಿಸಿದ್ದವರು ಇಂದು ಅಂಬಾನಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜೆಎನ್ ಯು ವಿವಿಯ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಮಾಡಲೆಂದು ಜನರು ಸರಕಾರವನ್ನು ಆಯ್ಕೆ ಮಾಡಿದ್ದಾರೆ ಹೊರತು ಧರ್ಮವೊಂದನ್ನು ರಕ್ಷಿಸಲು ಅಲ್ಲ. ಅಧಿಕಾರಕ್ಕೇರಿದ ನಂತರ ಬಿಜೆಪಿ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೆಸೆಯುವುದಾಗಿ ಹೇಳಿತ್ತು. ಆದರೆ ಹಲವು ಭ್ರಷ್ಟಾಚಾರಿಗಳಿಗೆ ಬಿಜೆಪಿ ಪಕ್ಷದಲ್ಲಿ ಅವಕಾಶ ನೀಡಿದೆ” ಎಂದವರು ಹೇಳಿದರು.
ನೋಟು ಅಮಾನ್ಯೀಕರಣದಿಂದ ಉದ್ಯಮ ವಲಯ ತತ್ತರಿಸಿದ್ದಾಗ ಅಮಿತ್ ಶಾ ಪುತ್ರನ ಕಂಪೆನಿ ಭಾರೀ ಲಾಭ ಗಳಿಸಿತು ಎಂದವರು ಹೇಳಿದರು.
Next Story