ಬರಹಗಾರರಾದ ಪಿ.ವರವರ ರಾವ್, ಸುಧಾ ಭಾರದ್ವಾಜ್ ಬಂಧನ
ಹೊಸದಿಲ್ಲಿ, ಆ.28: ಕ್ರಾಂತಿಕಾರಿ ಬರಹಗಾರ ಪಿ.ವರವರ ರಾವ್ ಮತ್ತು ಸುಧಾ ಭಾರದ್ವಾಜ್ ರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ ಎಂದು ವರದಿಯಾಗಿದೆ.
ಗಾಂಧಿ ನಗರದಲ್ಲಿರುವ ರಾವ್ ಅವರ ಮನೆಯಲ್ಲಿ 8 ಗಂಟೆಗಳ ಕಾಲ ತಪಾಸಣೆ ನಡೆಸಲಾಯಿತು. ಮಾವೋವಾದಿ ಪಕ್ಷದೊಂದಿಗಿರುವ ಸಂಬಂಧ ಲ್ಯಾಪ್ ಟಾಪ್ ಮತ್ತು ಇತರ ದಾಖಲೆಗಳ ಮೂಲಕ ತಿಳಿದುಬಂದ ನಂತರ ಪತ್ರಕರ್ತರಾದ ಟೆಕುಲಾ ಕ್ರಾಂತಿಯವರ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
2017ರ ಡಿಸೆಂಬರ್ 31ರಂದು ಆಯೋಜಿಸಿದ್ದ ಎಲ್ಗಾರ್ ಪರಿಷತ್ ಸಭೆಯನ್ನು ವ್ಯವಸ್ಥೆಗೊಳಿಸುವಲ್ಲಿ ಪ್ರಮುಖ ಮಾವೋವಾದಿ ನಕ್ಸಲೀಯ ಮುಖಂಡರ ಕೈವಾಡ ಇದೆ ಎನ್ನುವ ಶಂಕೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ದಿಲ್ಲಿ, ಹೈದರಾಬಾದ್, ರಾಂಚಿ, ಗೋವಾ ಹಾಗೂ ಮುಂಬೈನಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.
Next Story