ಉದ್ಯಮಿಗೆ ಹಲ್ಲೆಗೈದು, 6.7 ಲಕ್ಷ ರೂ. ದೋಚಿದ ದುಷ್ಕರ್ಮಿಗಳು
ಹೈದರಾಬಾದ್, ಆ.31: ಅನಿಲ ಗೋಡೌನ್ ಸೂಪರ್ ವೈಸರ್ ಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು 6.7 ಲಕ್ಷ ರೂ.ಗಳನ್ನು ದೋಚಿರುವ ಘಟನೆ ಹೈದರಾಬಾದಿನ ರಾಜೇಂದ್ರ ನಗರದರಲ್ಲಿ ನಡೆದಿದೆ.
ನಾಲ್ಕು ಮಂದಿಯ ತಂಡ ದರೋಡೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಘಟನೆ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವೇಲದಲ್ಲಿರುವ ಇಂಧನ ಅನಿಲ ಗೋದಾಮಿನ ಇನ್ಚಾರ್ಜ್ ಆದ ಜಿ. ರಾಮು(28) ಬೈಕಿನಲ್ಲಿ ರಾತ್ರಿ ಸಂತೋಷ ನಗರದ ತನ್ನ ಮನೆಗೆ ಹೋಗುತ್ತಿದ್ದಾಗ ನಾಲ್ವರು ಅಡ್ಡಗಟ್ಟಿ ಹಲ್ಲೆ ನಡೆಸಿ ರಾಮುರಲ್ಲಿದ್ದ ಹಣದ ಬ್ಯಾಗನ್ನು ದೋಚಿದ್ದಾರೆ ಎಂದು ರಾಜೇಂದ್ರನಗರ ಇನ್ಸ್ಪೆಕ್ಟರ್ ಜಿ.ಸುರೇಶ್ ಹೇಳಿದರು.
Next Story