ವಿಮಾನದ ಆಸನದ ಮೇಲೆ ಮೂತ್ರ ವಿಸರ್ಜನೆ: ತನಿಖೆಗೆ ಕೇಂದ್ರ ಸಚಿವರ ಆದೇಶ
ಹೊಸದಿಲ್ಲಿ, ಸೆ.1: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಆಸನದ ಮೇಲೆ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆಗೆ ಸಂಬಂಧಿಸಿ ತನಿಖೆ ನಡೆಸುವಂತೆ ಕೇಂದ್ರ ಸಚಿವ ಜಯಂತ್ ಸಿನ್ಹಾ ಶನಿವಾರ ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿದ್ದಾರೆ.
ಆ.30 ರಂದು ಏರ್ ಇಂಡಿಯಾ ಅಂತರ್ರಾಷ್ಟ್ರೀಯ ವಿಮಾನ ನ್ಯೂಯಾರ್ಕ್ನಿಂದ ಹೊಸದಿಲ್ಲಿಗೆ ಬರುತ್ತಿದ್ದಾಗ ಈ ಘಟನೆ ನಡೆದಿತ್ತು.
ತನ್ನ ತಾಯಿ ಕುಳಿತ್ತಿದ್ದ ಸೀಟಿನ ಮೇಲೆ ಪ್ರಯಾಣಿಕನೊಬ್ಬ ಮೂತ್ರ ಮಾಡಿದ್ದ ಎಂದು ಇಂದ್ರಾಣಿ ಘೋಷ್ ಎಂಬ ಮಹಿಳೆ ಟ್ವೀಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿ ವಿಷಾದ ವ್ಯಕ್ತಪಡಿಸಿದ ಕೇಂದ್ರ ಸಚಿವ ಜಯಂತ್ ಸಿನ್ಹಾ ತಕ್ಷಣವೇ ಘಟನೆ ಬಗ್ಗೆ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ,ಏರ್ ಇಂಡಿಯಾಕ್ಕೆ ಸೂಚನೆ ನೀಡಿದ್ದಾರೆ.
Next Story