ಖಿನ್ನತೆಯಿಂದ ಬಳಲುತ್ತಿರುವ ಲಾಲೂ ಪ್ರಸಾದ್ ಯಾದವ್
ರಾಂಚಿ, ಸೆ.10: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ನಿರ್ದೇಶಕ ಆರ್.ಕೆ. ಶ್ರೀವಾಸ್ತವ ತಿಳಿಸಿದ್ದಾರೆ.
ರಿಮ್ಸ್ನಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಆರೋಗ್ಯ ತಸಾಸಣೆ ನಡೆಸಿರುವ ವೈದ್ಯರುಗಳು ತಮ್ಮ ವರದಿಯಲ್ಲಿ ಈ ವಿಚಾರವನ್ನು ನಮೂದಿಸಿದ್ದಾರೆ. ಏಮ್ಸ್ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲೂ ಪ್ರಸಾದ್ಗೆ ಖಿನ್ನತೆಯಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಮಾನಸಿಕ ತಜ್ಞರು ಲಾಲೂ ಪ್ರಸಾದ್ರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದಾರೆಂಬ ವರದಿಗೆ ಪ್ರತಿಕ್ರಿಯೆ ನೀಡಿದ ಶ್ರೀವಾಸ್ತವ, ಈ ತನಕ ನಮಗೆ ಅಂತಹ ಯಾವುದೇ ಬೆಳವಣಿಗೆಯ ಬಗ್ಗೆ ತಿಳಿದುಬಂದಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ಪ್ರಕರಣಗಳು ತನ್ನ ಕುಟುಂಬದ ಮೇಲೆ ಪರಿಣಾಮಬೀರುತ್ತಿರುವುದು ಹಾಗೂ ಇಬ್ಬರು ಪುತ್ರರಾದ ತೇಜಸ್ವಿ ಯಾದವ್ ಹಾಗೂ ತೇಜ್ಪ್ರತಾಪ್ ಯಾದವ್ ನಡುವೆ ಆರ್ಜೆಡಿ ಉತ್ತರಾಧಿಕಾರಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿರುವುದು ಲಾಲೂ ಪ್ರಸಾದ್ರ ಆರೋಗ್ಯ ಹದಗೆಡಲು ಕಾರಣ ಎನ್ನಲಾಗಿದೆ.