ಬುರಾರಿಯ ಒಂದೇ ಕುಟುಂಬದ 11 ಮಂದಿಯ ನಿಗೂಢ ಸಾವು “ಆತ್ಮಹತ್ಯೆಯಲ್ಲ, ಅವಘಡ”: ಮರಣೋತ್ತರ ವರದಿ
ಹೊಸದಿಲ್ಲಿ, ಸೆ.15: ಇಲ್ಲಿನ ಬುರಾರಿಯ ಕುಟುಂಬವೊಂದರ 11 ಮಂದಿಯ ನಿಗೂಢ ಸಾವಿನ ಬಗ್ಗೆ ಮಾನಸಿಕ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಕುಟುಂಬದ 11 ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಚರಣೆಯ ವೇಳೆ ನಡೆದ ಅವಘಡ ಇದಾಗಿದೆ ಎಂದಿದೆ.
ನಿಗೂಢ ಸಾವಿನ ಪ್ರಕರಣದ ಮಾನಸಿಕ ಮರಣೋತ್ತರ ಪರೀಕ್ಷೆ ನಡೆಸುವಂತೆ ದಿಲ್ಲಿ ಪೊಲೀಸರು ಜುಲೈ ತಿಂಗಳಲ್ಲಿ ಸಿಬಿಐಗೆ ಪತ್ರ ಬರೆದಿದ್ದರು.
“ಮೃತಪಟ್ಟವರ ಮಾನಸಿಕ ಮರಣೋತ್ತರ ಪರೀಕ್ಷೆಯಲ್ಲಿ ಘಟನೆಯು ಆತ್ಮಹತ್ಯೆಯಲ್ಲ, ಬದಲಾಗಿ ಆಚರಣೆಯ ಸಂದರ್ಭ ನಡೆದ ಅವಘಡ. ತಮ್ಮ ಜೀವನವನ್ನು ಅಂತ್ಯಗೊಳಿಸುವ ಉದ್ದೇಶ ಕುಟುಂಬದ ಯಾವೊಬ್ಬ ಸದಸ್ಯನಿಗೂ ಇರಲಿಲ್ಲ” ಎಂದು ವರದಿ ತಿಳಿಸಿದೆ.
Next Story