ಜಸ್ವಂತ್ ಸಿಂಗ್ ಪುತ್ರ ಬಿಜೆಪಿಗೆ ರಾಜೀನಾಮೆ
ಬರ್ಮರ್, ಸೆ. 22: ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಬಿಜೆಪಿಗೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಬರ್ಮರ್ನಲ್ಲಿ ಶನಿವಾರ ನಡೆದ ಸ್ವಾಭಿಮಾನ ರ್ಯಾಲಿಯಲ್ಲಿ ಮಾತನಾಡಿದ ಮನ್ವೇಂದ್ರ ಸಿಂಗ್, ಬಿಜೆಪಿ ಸೇರಿರುವುದು ಪ್ರಮಾದ ಎಂದಿದ್ದಾರೆ.
ಗೌರವ ಹಾಗೂ ಸಂಕಲ್ಪಕ್ಕಾಗಿ ಹಲವು ರ್ಯಾಲಿಗಳು ನಡೆದಿವೆ. ಆದರೆ, ಇದು ಅತಿ ದೊಡ್ಡ ರ್ಯಾಲಿ. ಇದು ಸ್ವಾಭಿಮಾನದ ರ್ಯಾಲಿ. ಸ್ವಾಭಿಮಾನ ನಮ್ಮ ಹಕ್ಕು. ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಅವರು ಹೇಳಿದರು.
2014ರ ಲೋಕಸಭಾ ಚುನಾವಣೆಯಲ್ಲಿ ತಂದೆಗೆ ಟಿಕೆಟ್ ನೀಡದ ಬಳಿಕ ಮನ್ವೇಂದ್ರ ಸಿಂಗ್ ಅವರಿಗೆ ಬಿಜೆಪಿಯೊಂದಿಗೆ ಇದ್ದ ಬಾಂಧವ್ಯ ಮರಿದು ಬಿದ್ದಿತ್ತು. ಈ ವಿಷಯವನ್ನು ನೆನಪಿಸಿದ ಅವರು, ಇದುವರೆಗೆ ತಾಳ್ಮೆಯಿಂದ ಬಿಜೆಪಿಯಲ್ಲಿ ಮುಂದುವರಿದೆ. ಈಗ ಮಾತನಾಡಲು ಸಕಾಲ ಎಂದಿದ್ದಾರೆ.
Next Story