ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಖ್ಲಾಕ್ ಹತ್ಯೆ ಪ್ರಕರಣದ ಆರೋಪಿ
ನೋಯ್ಡಾ, ಸೆ.24: ಗೋಮಾಂಸ ಹೊಂದಿದ್ದ ಆರೋಪದಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ 2015ರಲ್ಲಿ ಮುಹಮ್ಮದ್ ಅಖ್ಲಾಕ್ ಎಂಬವರನ್ನು ಥಳಿಸಿ ಕೊಂದ ಪ್ರಕರಣದ ಆರೋಪಿಗಳಲ್ಲೊಬ್ಬನಾದ ರೂಪೇಂದ್ರ ರಾಣಾ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾನೆ ಎನ್ನಲಾಗಿದೆ.
ಎರಡೂವರೆ ವರ್ಷಗಳ ಜೈಲುವಾಸ ಅನುಭವಿಸಿರುವ ರಾಣಾ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ನೋಯ್ಡಾದ ಗೌತಮಬುದ್ಧನಗರ ಕ್ಷೇತ್ರದಿಂದ ರಾಣಾ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ಉತ್ತರ ಪ್ರದೇಶ ನವನಿರ್ಮಾಣ ಸೇನಾ ಅಧ್ಯಕ್ಷ ಅಮಿತ್ ಜಾನಿ ಘೋಷಿಸಿದ್ದಾರೆ.
"ಗೋಸಂರಕ್ಷಣೆಗೆ ರಾಣಾ ಪರಿಪೂರ್ಣ ವ್ಯಕ್ತಿ; ಈಗಾಗಲೇ ಅವರು ಗೋಮಾತೆಯ ಗೌರವ ಕಾಪಾಡಲು ಎರಡೂವರೆ ವರ್ಷವನ್ನು ಜೈಲಿನಲ್ಲಿ ಕಳೆದಿದ್ದಾರೆ" ಎಂದು ಜಾನಿ "ಟೈಮ್ಸ್ ಆಫ್ ಇಂಡಿಯಾ" ಜತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ. "ಗೋವಿನ ಸಂರಕ್ಷಣೆಗೆ ಸುಳ್ಳು ಆಶ್ವಾಸನೆ ಕೊಡುವ ಬದಲು, 2015ರಲ್ಲಿ ಗೋವಿಗಾಗಿ ತಮ್ಮ ಬದ್ಧತೆ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ" ಎಂದು ಜಾನಿ ಗುಣಗಾನ ಮಾಡಿದ್ದಾರೆ.
Next Story