ನಿರೀಕ್ಷಣಾ ಜಾಮೀನು ಕೋರಿ ನಕ್ಕೀರನ್ ಉದ್ಯೋಗಿಗಳು ಹೈಕೋರ್ಟ್ಗೆ
ಚೆನ್ನೈ, ಅ. 12: ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಬಗ್ಗೆ ಲೇಖನ ಪ್ರಕಟಿಸಿದ ಕುರಿತಂತೆ ಮ್ಯಾಗಝಿನ್ನ ಸಂಪಾದಕ ಮತ್ತು ತಮ್ಮ ವಿರುದ್ದ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಸಹಿತ ನಕ್ಕೀರನ್ ಪತ್ರಿಕೆಯ 35 ಉದ್ಯೋಗಿಗಳು ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನಕ್ಕೀರನ್ ಪತ್ರಿಕೆಯ ಲೇಖನದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ ಉದ್ಯೋಗಿಗಳನ್ನು ಹೆಸರಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಂಪಾದಕ ಆರ್. ಗೋಪಾಲನ್ ಅವರನ್ನು ಬಂಧಿಸಲಾಗಿತ್ತು ಹಾಗೂ ಅನಂತರ ಬಿಡುಗಡೆಗೊಳಸಲಾಗಿತ್ತು.
Next Story