ಮಾಜಿ ಮುಖ್ಯಮಂತ್ರಿ ಪ್ರಕಾಶ್ ಬಾದಲ್ ಹತ್ಯೆಗೆ ರೈಫಲ್ ದೋಚಿದ ಖಲಿಸ್ಥಾನ ಪರ ಗುಂಪು
ಮಝಫ್ಫರನಗರ್, ಅ. 16: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಗುರಿಯಾಗಿರಿಸಿ ದಾಳಿ ನಡೆಸುವ ಉದ್ದೇಶದಿಂದ ಎರಡು ಪೊಲೀಸ್ ರೈಫಲ್ಗಳನ್ನು ದೋಚಿದ ಆರೋಪದಲ್ಲಿ ಖಲಿಸ್ಥಾನ್ ಲಿಬರೇಶನ್ ಫ್ರಂಟ್ ಪರ ಗುಂಪಿನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾದಲ್ ಅವರನ್ನು ಗುರಿಯಾಗಿರಿಸಿ ದಾಳಿ ನಡೆಸಲು ನಾವು ರೈಫಲ್ಗಳನ್ನು ದೋಚಿದೆವು. ನಮ್ಮ ತಂಡದ ಇಬ್ಬರು ಪರಾರಿಯಾಗಿದ್ದಾರೆ ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಎಡಿಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಆರೋಪಿಗಳು ಖಲಿಸ್ಥಾನ್ ಲಿಬರೇಶನ್ ಫ್ರಂಟ್ನೊಂದಿಗೆ ಸಂಬಂಧ ಹೊಂದಿರುವುದು ಬೆಳಕಿಗೆ ಬಂದ ಬಳಿಕ ಪಂಜಾಬ್ ಹಾಗೂ ಉತ್ತರಪ್ರದೇಶ ಪೊಲೀಸರು ಜಾಗೃತರಾಗಿದ್ದಾರೆ. ಮುಂದಿನ ತನಿಖೆಯನ್ನು ಎಟಿಎಸ್ಗೆ ಹಸ್ತಾಂತರಿಸಲಾಗಿದೆ ಎಂದು ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
Next Story