ರಾಮಮಂದಿರ ನಿರ್ಮಿಸಿ ಅಥವಾ ಇದೂ ಕೂಡ ನಿಮ್ಮ ಜುಮ್ಲಾ ಎಂದು ಒಪ್ಪಿಕೊಳ್ಳಿ
ಪ್ರಧಾನಿ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ
ಹೊಸದಿಲ್ಲಿ, ಅ.18: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗದ ಬಗ್ಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಭೂಪಟದಲ್ಲಿ ನಾವು ನೋಡಿರದ ದೇಶಗಳಿಗೆ ನೀವು ಹೋಗುತ್ತೀರಿ. ಆದರೆ ನೀವೇಕೆ ಅಯೋಧ್ಯೆಗೆ ಹೋಗಿಲ್ಲ?” ಎಂದು ಠಾಕ್ರೆ ಪ್ರಶ್ನಿಸಿದರು. “ನವೆಂಬರ್ 25ರಂದು ನಾನು ಅಯೋಧ್ಯೆಗೆ ಹೋಗಲಿದ್ದೇನೆ ಎಂದ ಅವರು, “ಒಂದೋ ರಾಮಮಂದಿರ ನಿರ್ಮಿಸಿ ಅಥವಾ ಇದೂ ಕೂಡ ನಿಮ್ಮ ಜುಮ್ಲಾ ಎಂದು ಒಪ್ಪಿಕೊಳ್ಳಿ” ಎಂದರು.
ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸಬೇಕು” ಎಂದು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಕೂಡ ಆಗ್ರಹಿಸಿದ್ದಾರೆ.
Next Story