ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಲು ಜನರನ್ನು ಉತ್ತೇಜಿಸುತ್ತಿರುವ ಅಮಿತ್ ಶಾ: ಕೇಜ್ರಿವಾಲ್ ಟೀಕೆ
ಶಬರಿಮಲೆ ತೀರ್ಪು
ಹೊಸದಿಲ್ಲಿ, ಅ.29: ಬಿಜೆಪಿ ಅಧ್ಯಕ್ಷ ಅಮಿತ್ ಶಾ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಲು ಜನರಿಗೆ ಉತ್ತೇಜನ ನೀಡುತ್ತಿದ್ದಾರೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಶಬರಿಮಲೆ ವಿವಾದದ ಕುರಿತಂತೆ ಶಾ ಕೇರಳದಲ್ಲಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರ ಈ ಆರೋಪ ಟ್ವೀಟ್ ಮುಖಾಂತರ ಬಂದಿದೆ. ಜನರ ಧಾರ್ಮಿಕ ನಂಬಿಕೆಗಳಿಗೆ ತದ್ವಿರುದ್ಧವಾದ ಹಾಗೂ ಜಾರಿಗೊಳಿಸಲಾಗದ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ನೀಡಬಾರದೆಂದು ಅಮಿತ್ ಶಾ ಹೇಳಿದ್ದರು.
ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಕೂಡ ಶಾ ಹೇಳಿಕೆಗೆ ಆಕ್ಷೇಪಿಸಿ ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿದ್ದರು.
Next Story