ಆಪ್ನಿಂದ ಸುಖ್ಪಾಲ್ ಖೈರ, ಕನ್ವರ್ ಸಂಧು ಅಮಾನತು
ಹೊಸದಿಲ್ಲಿ, ನ. 3: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡ ಹಿನ್ನೆಲೆಯಲ್ಲಿ ಬಂಡಾಯ ನಾಯಕರಾದ ಸುಖ್ಪಾಲ್ ಸಿಂಗ್ ಖೈರ ಹಾಗೂ ಕನ್ವರ್ ಸಂಧು ಅವರನ್ನು ಆಪ್ನಿಂದ ಶನಿವಾರ ಅಮಾನತುಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡ ಹಿನ್ನೆಲೆಯಲ್ಲಿ ಸುಖ್ಪಾಲ್ ಸಿಂಗ್ ಖೈರ ಹಾಗೂ ಕನ್ವರ್ ಸಂಧು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆಪ್ ನಾಯಕ ಹಾಗೂ ಪಂಜಾಬ್ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ತಿಳಿಸಿದ್ದಾರೆ.
ಅನುಕ್ರಮವಾಗಿ ಭೋಲಾಥ್ ಹಾಗೂ ಖರಾರ್ ಶಾಸಕರಾದ ಖೈರ ಹಾಗೂ ಸಂಧು ಅವರನ್ನು ವಜಾಗೊಳಿಸಲು ಕೋರ್ ಸಮಿತಿ ರಾಜಕೀಯ ವ್ಯವಹಾರಗಳ ಸಮಿತಿಯ ಅನುಮತಿ ಪಡೆದಿದೆ ಎಂದು ಅವರು ಹೇಳಿದ್ದಾರೆ. ಖೈರ ಹಾಗೂ ಸಂಧು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಹಾಗೂ ಪಕ್ಷದ ಕೇಂದ್ರ ಹಾಗೂ ರಾಜ್ಯದ ನಾಯಕತ್ವದ ಬಗ್ಗೆ ನಿರಂತರ ದಾಳಿ ನಡೆಸಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.
Next Story