ಕಾರ್ಖಾನೆಯಲ್ಲಿ ಬೆಂಕಿ: ಇಬ್ಬರು ಮಹಿಳೆಯರು ಸಹಿತ ನಾಲ್ವರು ಮೃತ್ಯು
ಹೊಸದಿಲ್ಲಿ, ನ.19: ದಿಲ್ಲಿಯ ಕರೋಲ್ಬಾಘ್ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಮೃತಪಟ್ಟಿದ್ದು, ಓರ್ವನಿಗೆ ಗಾಯವಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ಘಟನೆಯು ಮಧ್ಯಾಹ್ನ 12:30ರ ಸುಮಾರಿಗೆ ನಡೆದಿದೆ. ಕೆಲಸ ಮಾಡುವಾಗಲೇ ಮೃತಪಟ್ಟ ಕಾರ್ಮಿಕರನ್ನು ಬಗಾನ್ ಪ್ರಸಾದ್(55), ಆರ್ಎಂ ನರೇಶ್(40), ಆರತಿ(20) ಹಾಗೂ ಆಶಾ(40) ಎಂದು ಗುರುತಿಸಲಾಗಿದೆ.
ಎರಡು ಅಗ್ನಿಶಮನ ಯಂತ್ರಗಳು ಸ್ಥಳಕ್ಕೆ ಧಾವಿಸಿದ್ದು, 12:50ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದಿಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ದಿಲ್ಲಿಯಲ್ಲಿ 2 ದಿನಗಳಲ್ಲಿ 2ನೇ ಬಾರಿ ಅಗ್ನಿ ಅನಾಹುತ ಘಟನೆ ಸಂಭವಿಸಿದೆ. ಶನಿವಾರ ಬಾಬಾ ಖರಾಕ್ ಸಿಂಗ್ ಮಾರ್ಗದಲ್ಲಿರುವ ರೆಸ್ಟೋರೆಂಟ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿರಲಿಲ್ಲ
Next Story