ರೈತರಿಂದ ಎರಡು ದಿನಗಳ ರ್ಯಾಲಿ
ಮುಂಬೈ, ನ. 21: ಬರ ಪರಿಹಾರ ನೀಡುವಂತೆ ಹಾಗೂ ಅರಣ್ಯ ಹಕ್ಕನ್ನು ಬುಡಕಟ್ಟು ಜನರಿಗೆ ವರ್ಗಾಯಿಸುವಂತೆ ಆಗ್ರಹಿಸಿ ಸಾವಿರಾರು ರೈತರು ಹಾಗೂ ಬುಡಕಟ್ಟು ಜನರು ಥಾಣೆಯಿಂದ ಮುಂಬೈಗೆ ಬುಧವಾರದಿಂದ ಎರಡು ದಿನಗಳ ರ್ಯಾಲಿ ನಡೆಸಲಿದ್ದಾರೆ.
ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಡಾ. ರಾಜೇಂದ್ರ ಸಿಂಗ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರ್ಯಾಲಿ ಬುಧವಾರ ಅಪರಾಹ್ನ ಆರಂಭವಾಗಲಿದೆ ಹಾಗೂ ಮುಂಬೈ ಸಿಯೋನ್ ಪ್ರದೇಶದ ಸೋಮಯ್ಯಾ ಮೈದಾನಕ್ಕೆ ತಲುಪಿ ರಾತ್ರಿ ಅಲ್ಲಿ ತಂಗಲಿದೆ. ದಕ್ಷಿಣ ಮುಂಬೈಯ ಆಝಾದ್ ಮೈದಾನಕ್ಕೆ ಗುರುವಾರ ಬೆಳಗ್ಗೆ ತಲುಪಲಿದೆ ಹಾಗೂ ವಿಧಾನ ಭವನದ ಎದುರು ಪ್ರತಿಭಟನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
Next Story