ಕಾಶ್ಮೀರ ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಪ್ರತ್ಯೇಕತಾವಾದಿಗಳ ಪತ್ರ
ಶ್ರೀನಗರ, ಡಿ. 10: ಕಾಶ್ಮೀರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಿ ಎಂದು ಸೋಮವಾರ ಪ್ರತ್ಯೇಕತಾವಾದಿಗಳು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಆಗ್ರಹಿಸಿದ್ದಾರೆ. ಪ್ರತ್ಯೇಕತಾವಾದಿಗಳ ನಾಯಕರಾದ ಸೈಯದ್ ಅಲಿ ಶಾ ಗೀಲಾನಿ, ಮಿರ್ವೈಝ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸೀನ್ ಮಲಿಕ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ಗೆ ಬರೆದೆ ಪತ್ರದಲ್ಲಿ ಕಣಿವೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಸಂಘರ್ಷಕ್ಕೆ ಹಲವು ಜೀವಗಳು ಬಲಿಯಾಗಿರುವುದರಿಂದ ಉತ್ತರದಾಯಿತ್ವ ಖಾತರಿಪಡಿಸಲು ಹಾಗೂ ಹಿಂಸಾಚಾರದ ಆವರ್ತನೆ ಅಂತ್ಯಗೊಳಿಸಲು ಆಯೋಗ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಸೋಮವಾರ ಗುಟೆರಸ್ಗೆ ಬರೆದಿರುವ ಪತ್ರದಲ್ಲಿ ಪ್ರಕ್ಷುಬ್ದಗೊಂಡ ಪ್ರದೇಶದಲ್ಲಿ ಭದ್ರತಾ ಪಡೆಗಳಿಗೆ ವಿಶೇಷ ಅಧಿಕಾರ ನೀಡುವ ಶಸಸ್ತ್ರ ಪಡೆಯ ವಿಶೇಷಾಧಿಕಾರ ಕಾಯ್ದೆಯನ್ನು ಪ್ರತ್ಯೇಕತಾವಾದಿಗಳು ಟೀಕಿಸಿದ್ದಾರೆ.
Next Story