ಸಿಖ್ ವಿರೋಧಿ ದಂಗೆ: ಶರಣಾಗತಿಗೆ 30 ದಿನ ಕಾಲಾವಕಾಶ ಕೇಳಿದ ಸಜ್ಜನ್ ಕುಮಾರ್
ಹೊಸದಿಲ್ಲಿ, ಡಿ.20: 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಕಾಂಗ್ರೆಸ್ನ ಮಾಜಿ ಸಂಸದ ಸಜ್ಜನ್ ಕುಮಾರ್ ಶರಣಾಗತಿಗೆ 30 ದಿನಗಳ ಕಾಲಾವಕಾಶ ನೀಡಬೇಕೆಂದು ದಿಲ್ಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯ ಶುಕ್ರವಾರ ಮನವಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿ ಸಜ್ಜನ್ಕುಮಾರ್ಗೆ ಡಿ.31ರೊಳಗೆ ಪೊಲೀಸರಿಗೆ ಶರಣಾಗಬೇಕೆಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ದಿಲ್ಲಿ ಹೈಕೋರ್ಟ್ನ ಜಸ್ಟಿಸ್ ಮುರಳೀಧರ್ ಹಾಗೂ ಜಸ್ಟಿಸ್ ವಿನೋದ್ ಗೊಯೆಲ್ ಅವರಿದ್ದ ಪೀಠ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಸಜ್ಜನ್ಕುಮಾರ್ಗೆ ಜೀವಾವಧಿ ಶಿಕ್ಷೆಯ ಜೊತೆಗೆ 1 ಲಕ್ಷ ರೂ. ದಂಡ ವಿಧಿಸಿದ್ದಲ್ಲದೆ, ದೇಶಬಿಟ್ಟು ಹೋಗದಂತೆ ಆದೇಶಿಸಿತ್ತು.
Next Story