ಅಜ್ಮೀರ್ ಸಾಹಿತ್ಯೋತ್ಸವದಲ್ಲಿ ನಾಸಿರುದ್ದೀನ್ ಶಾ ಕಾರ್ಯಕ್ರಮ ರದ್ದು
ಸಂಘಪರಿವಾರದ ಪ್ರತಿಭಟನೆ
ಅಜ್ಮೀರ್, ಡಿ. 21: ಸಂಘ ಪರಿವಾರದ ಪ್ರತಿಭಟನೆ ಹಿನ್ನೆಲೆಯಲ್ಲಿ ಅಜ್ಮೀರ್ ಸಾಹಿತ್ಯೋತ್ಸವದಲ್ಲಿ ನಾಸಿರುದ್ದೀನ್ ಶಾ ಅವರ ಪಾಲ್ಗೊಳ್ಳಲಿದ್ದ ಶುಕ್ರವಾರದ ಕಾರ್ಯಕ್ರಮನ ರದ್ದುಗೊಳಿಸಲಾಯಿತು.
ದೇಶದ ಕೆಲವು ಭಾಗಗಳಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆಗಿಂತ ಗೋಹತ್ಯೆ ಪ್ರಕರಣಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಾಸಿರುದ್ದೀನ್ ಶಾ ಅವರು ಅಜ್ಮೀರ್ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುವುದನ್ನು ವಿರೋಧಿಸಿ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಅವರು ಪಾಲ್ಗೊಳ್ಳಲಿದ್ದ ಕಾರ್ಯಕ್ರಮ ರದ್ದುಗೊಳಿಸಲಾಯಿತು. ನಾಸಿರುದ್ದೀನ್ ಶಾ ಸುರಕ್ಷತೆ ಹಾಗೂ ಸಾಹಿತ್ಯೋತ್ಸವ ನಡೆಯುತ್ತಿರುವ ಸ್ಥಳದ ಭದ್ರತೆ ಗಮನದಲ್ಲಿರಿಸಿ ಅವರ ಕಾರ್ಯಕ್ರಮ ರದ್ದುಗೊಳಿಸಲಾಯಿತು ಎಂದು ಲಿಟರೇಚರ್ ಸೊಸೈಟಿಯ ಸದಸ್ಯರೊಬ್ಬರು ಹೇಳಿದ್ದಾರೆ.
Next Story