“ನಾನು ಇದನ್ನು ಪ್ರಪ್ರಥಮ ಬಾರಿಗೆ ಬಹಿರಂಗಪಡಿಸುತ್ತಿದ್ದೇನೆ”
ಊರ್ಜಿತ್ ಪಟೇಲ್ ರಾಜೀನಾಮೆ ಬಗ್ಗೆ ಮೋದಿ ಹೇಳಿದ್ದೇನು?
ಹೊಸದಿಲ್ಲಿ, ಜ.1: ಆರ್ ಬಿಐ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದು, ಮೊದಲಿನಿಂದಲೂ ಈ ಬಗ್ಗೆ ಹೇಳುತ್ತಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎಎನ್ ಐ ಜೊತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, “ನಾನು ಇದನ್ನು ಪ್ರಪ್ರಥಮ ಬಾರಿಗೆ ಬಹಿರಂಗಪಡಿಸುತ್ತಿದ್ದೇನೆ. ರಾಜೀನಾಮೆಗೂ 6-7 ತಿಂಗಳ ಹಿಂದಿನಿಂದಲೂ ಅವರು ನನ್ನ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ಲಿಖಿತವಾಗಿಯೂ ಈ ಬಗ್ಗೆ ತಿಳಿಸಿದ್ದಾರೆ. ವೈಯಕ್ತಿಕವಾಗಿಯೂ ನನಗೆ ಪತ್ರ ಬರೆದಿದ್ದಾರೆ” ಎಂದು ಹೇಳಿದರು.
Next Story