ಮಾರ್ಚ್ ಅಂತ್ಯದ ಒಳಗೆ 70 ಸಾವಿರ ಕೋಟಿ ರೂ. ಕೆಟ್ಟ ಸಾಲಗಳ ಸಂಗ್ರಹ: ಜೇಟ್ಲಿ
ಹೊಸದಿಲ್ಲಿ, ಜ. 3: ಹನ್ನೆರೆಡು ಬೃಹತ್ ಪ್ರಕರಣಗಳ ಪರಿಹಾರವಾದ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯದ ಒಳಗೆ ವಾಣಿಜ್ಯ ಬ್ಯಾಂಕ್ಗಳು 70,000 ಕೋಟಿ ರೂಪಾಯಿ ಕೆಟ್ಟ ಸಾಲಗಳನ್ನು ಮರಳಿ ಪಡೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.
ಭೂಷಣ್ ಪವರ್ ಆ್ಯಂಡ್ ಸ್ಟೀಲ್ ಲಿಮಿಟೆಡ್ ಹಾಗೂ ಎಸ್ಸಾರ್ ಸ್ಟೀಲ್ನಂತಹ ಕೆಲವು ಬೃಹತ್ ಪ್ರಕರಣಗಳು ಪರಿಹಾರವಾದ ಹಿನ್ನೆಲೆಯಲ್ಲಿ ಇತರ ಪ್ರಕರಣಗಳು ಕೂಡ ಈ ವಿತ್ತ ವರ್ಷದಲ್ಲಿ ಪರಿಹಾರವಾಗಬಹುದು ಎಂದು ಜೇಟ್ಲಿ ಫೇಸ್ಬುಕ್ನ ಬ್ಲಾಗ್ ಸ್ಪಾಟ್ನಲ್ಲಿ ಹೇಳಿದ್ದಾರೆ. 66 ಪ್ರಕರಣಗಳ ಪರಿಹಾರದಿಂದಾಗಿ ವಾಣಿಜ್ಯ ಬ್ಯಾಂಕ್ಗಳು ಇದುವರೆಗೆ 80,000 ಕೋಟಿ ರೂಪಾಯಿಯನ್ನು ಹಿಂದೆ ಪಡೆದಿದೆ ಎಂದು ಜೇಟ್ಲಿ ಹೇಳಿದ್ದಾರೆ.
Next Story