ನಿರ್ಮಲಾ ಸೀತಾರಾಮನ್ರಿಂದ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್: ಚಿದಂಬರಂ
ಹೊಸದಿಲ್ಲಿ, ಜ. 14: ಬಿಜೆಪಿ ನೇತೃತ್ವದ ಸರಕಾರದ ಆಡಳಿತ ಅವಧಿಯಲ್ಲಿ ಯಾವುದೇ ಪ್ರಮುಖ ಭಯೋತ್ಪಾದನ ಘಟನೆ ನಡೆದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಈ ಹೇಳಿಕೆ ನೀಡುವ ಮೂಲಕ ನಿರ್ಮಲಾ ಸೀತಾರಾಮನ್ ಪಠಾಣ್ ಕೋಟ್ ಹಾಗೂ ಉರಿ ದಾಳಿಗೆ ಸಂಬಂಧಿಸಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದರು.
2014ರ ಬಳಿಕ ಪಾಕಿಸ್ತಾನದಿಂದ ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ರಕ್ಷಣಾ ಸಚಿವರು ಹೇಳುತ್ತಿದ್ದಾರೆ. ಸಚಿವರು ಭಾರತದ ಭೂಪಟ ತೆಗೆದುಕೊಂಡು ಪಠಾಣ್ ಕೋಟ್ ಹಾಗೂ ಉರಿಯನ್ನು ಗುರುತಿಸಬಲ್ಲರೇ ? ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಈ ದಾಳಿ ಪಾಕಿಸ್ತಾನದಿಂದ ನಡೆದಿರುವುದು ಅಲ್ಲ ಎಂದು ಹೇಳುವ ಮೂಲಕ ರಕ್ಷಣಾ ಸಚಿವರು ಪಠಾಣ್ಕೋಟ್ ಹಾಗೂ ಉರಿ ದಾಳಿಗೆ ಸಂಬಂಧಿಸಿ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅವರು ಹೇಳಿದರು.
ಇದು 2019 ಮೇ ಅನಂತರವೂ ಜನರು ನೆನಪಿಡಬೇಕಾದ ವಾರದ ಅವಿಶ್ವಾಸನೀಯ ಹೇಳಿಕೆ. ಸತ್ಯ ಇದಕ್ಕೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.