ರಾಮ ಮಂದಿರ ನಿರ್ಮಾಣದ ದಿನಾಂಕ ತಿಳಿಸಿ: ಭಾಗವತ್ ಭಾಷಣದ ನಂತರ ಹಿಂದೂ ಸಂತರ ಗದ್ದಲ
ಪ್ರಯಾಗ್ರಾಜ್, ಫೆ.2: ಅಯೋಧ್ಯೆಯಲ್ಲಿ ರಾಮ ಮಂದಿರ ಯಾವಾಗ ನಿರ್ಮಾಣವಾಗುವುದು ಎಂದು ಹಿಂದೂ ಧಾರ್ಮಿಕ ನಾಯಕರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಲ್ಲಿ ಪ್ರಯಾಗ್ ರಾಜ್ ನಲ್ಲಿ ನಡೆದ ಸಮಾವೇಶದಲ್ಲಿ ಪ್ರಶ್ನಿಸಿದಾಗ ಅಲ್ಲಿ ಕೆಲ ಕಾಲ ಗದ್ದಲದ ವಾತಾವರಣ ಉಂಟಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮುಂದಿನ ಎರಡು ವರ್ಷಗಳಲ್ಲಿ ರಾಮ ಮಂದಿರ ನಿರ್ಮಿಸಲು ಕ್ರಮ ಕೈಗೊಳ್ಳುವುದು ಎಂದು ವಿಶ್ವ ಹಿಂದು ಪರಿಷತ್ತಿನ ಧರ್ಮ ಸಂಸತ್ತಿನಲ್ಲಿ ಆರೆಸ್ಸೆಸ್ ಮುಖ್ಯಸ್ಥರು ಹೇಳಿದ್ದರೆನ್ನಲಾಗಿದೆ. ಆದರೆ ಸಭೆಯಲ್ಲಿ ಹಾಜರಿದ್ದ ಸಂತರು ದೇವಳ ನಿರ್ಮಾಣದ ಗಡುವಿನ ದಿನಾಂಕ ಸೂಚಿಸುವಂತೆ (ತಾರೀಕ್ ಬತಾಯಿಯೇ) ಎಂದು ಗದ್ದಲ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ರಾಮ ಜನ್ಮ ಭೂಮಿ-ಬಾಬರಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 29ರಂದು ಕೈಗೆತ್ತಿಕೊಳ್ಳಬೇಕಿದ್ದರೂ ಪಂಚ ಸದಸ್ಯರ ಸಂವಿಧಾನಿಕ ಪೀಠದಲ್ಲಿ ಒಬ್ಬರಾಗಿದ್ದ ಜಸ್ಟಿಸ್ ಎಸ್ ಎ ಬೊಬ್ಡೆ ಅವರ ಅಲಭ್ಯತೆಯಿಂದಾಗಿ ವಿಚಾರಣೆ ಮುಂದೂಡಲ್ಪಟ್ಟಿತ್ತು. ವಿಚಾರಣೆಗೆ ಹೊಸ ತಾರೀಕು ಇನ್ನಷ್ಟೇ ಘೋಷಣೆಯಾಗಬೇಕಿದೆ.
Hungama at Dharam Sansad at #Kumbh2019 After Mohan Bhagwat says #RamMandir will be built in 1 or 2 yrs and endorses @narendramodi crowds chant 'Tareek Bataiye' @CNNnews18 pic.twitter.com/G7Tr5cinPS
— Shreya Dhoundial (@shreyadhoundial) February 1, 2019
#WATCH: Ruckus ensued after RSS chief Mohan Bhagwat's speech at the Dharm Sansad called by VHP in Prayagraj, protesters were demanding early construction of Ram temple in Ayodhya. pic.twitter.com/IGnOxThHuq
— ANI UP (@ANINewsUP) February 1, 2019