ಪ್ರಯಾಣಿಕನಿಗೆ ನೀಡಿದ ಆಹಾರದಲ್ಲಿ ಜಿರಳೆ: ಕ್ಷಮೆ ಯಾಚಿಸಿದ ಏರ್ ಇಂಡಿಯಾ
ಹೊಸದಿಲ್ಲಿ, ಫೆ.5: ಭೋಪಾಲ್-ಮುಂಬೈ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ವಿತರಿಸಲಾದ ಆಹಾರದಲ್ಲಿ ಜಿರಳೆ ಪತ್ತೆಯಾದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಇಂದು ಕ್ಷಮೆಯಾಚಿಸಿದೆ.
“ಭೋಪಾಲ್-ಮುಂಬೈ ವಿಮಾನದಲ್ಲಿ ವಿತರಿಸಲಾದ ಊಟದಲ್ಲಿ ನಿರಾಶಾದಾಯಕ ಅನುಭವವಾಗಿರುವುದರ ಬಗ್ಗೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ” ಎಂದು ಪ್ರಕಟನೆ ತಿಳಿಸಿದೆ.
ತನಗೆ ನೀಡಲಾದ ಇಡ್ಲಿ ವಡಾ ಸಾಂಬಾರ್ ನಲ್ಲಿ ಜಿರಳೆ ಪತ್ತೆಯಾಗಿತ್ತು ಎಂದು ರೋಹಿತ್ ರಾಜ್ ಸಿಂಗ್ ಚೌಹಾಣ್ ಎಂಬವರು ಆರೋಪಿಸಿದ್ದು, ಫೋಟೊ ಟ್ವೀಟ್ ಮಾಡಿದ್ದರು.
Next Story