ರಫೇಲ್ ಒಪ್ಪಂದ: ಸ್ವತಂತ್ರ ತನಿಖೆಗೆ ಚಂದ್ರಬಾಬು ನಾಯ್ಡು ಆಗ್ರಹ
ಅಮರಾವತಿ, ಫೆ.9: ರಫೇಲ್ ಒಪ್ಪಂದದ ವಿಷಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಒಪ್ಪಂದದ ಕುರಿತು ಇರುವ ಸಂದೇಹಗಳನ್ನು ಮತ್ತಷ್ಟು ಹೆಚ್ಚಿಸಿದ್ದು, ಸ್ವತಂತ್ರ ತನಿಖೆಯಿಂದ ಮಾತ್ರ ಸತ್ಯ ಹೊರಬೀಳಲಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
59 ಸಾವಿರ ಕೋಟಿ ರೂ. ಮೊತ್ತದ ರಫೇಲ್ ಒಪ್ಪಂದದ ಕುರಿತ ಪ್ರಧಾನಿ ಮೋದಿಯ ಮೌನವು ಬಿಜೆಪಿ ಸರಕಾರದ ವಿನಾಶಕಾರಿ ನಿರ್ಧಾರಗಳ ವಿಸ್ತಾರವನ್ನು ಸೂಚಿಸುತ್ತದೆ. ನೀವು ದೇಶವನ್ನು ಹೆಚ್ಚು ಸಮಯ ಮೋಸಗೊಳಿಸಲಾಗದು. ಸತ್ಯವನ್ನು ಅಡಗಿಸಿಡಲೂ ಆಗದು ಎಂದು ನಾಯ್ಡು ಸರಣಿ ಟ್ವೀಟ್ ಮಾಡಿದ್ದಾರೆ. ಸಮಾನಾಂತರ ಮಾತುಕತೆಯ ಮೂಲಕ ಪ್ರಧಾನಿ ಕಚೇರಿ ರಫೇಲ್ ಒಪ್ಪಂದದಲ್ಲಿ ಮಧ್ಯಪ್ರವೇಶಿಸಿದೆ ಎಂಬ ವರದಿಯನ್ನು ಉಲ್ಲೇಖಿಸಿದ ನಾಯ್ಡು, ಇದು ಆಘಾತಕಾರಿ ವರದಿಯಾಗಿದೆ. ಬಿಜೆಪಿ ಸರಕಾರದಲ್ಲೇ ಪರಸ್ಪರರ ಭಾವನೆಯನ್ನು ಗೌರವಿಸುವ ಕ್ರಮ ಅಥವಾ ಒಗ್ಗಟ್ಟು ಇಲ್ಲದಿರುವುದನ್ನು ಇದು ಸೂಚಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Next Story