ಜೈಶ್ ಉಗ್ರ ಆದಿಲ್ ಅಹ್ಮದ್ ನಿಂದ ದುಷ್ಕೃತ್ಯ: ಕಾರಿನಲ್ಲಿತ್ತು 350 ಕೆ.ಜಿ. ಬಾಂಬ್!
ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣ
ಹೊಸದಿಲ್ಲಿ, ಫೆ.14: 20 ಸೈನಿಕರ ಸಾವಿಗೆ ಕಾರಣವಾದ, ಸಿಆರ್ ಪಿಎಫ್ ಬಸ್ ಗೆ ಢಿಕ್ಕಿ ಹೊಡೆದ ಕಾರನ್ನು ಉಗ್ರ ಸಂಘಟನೆ ಜೈಶ್ ನ ಆದಿಲ್ ಅಹ್ಮದ್ ದಾರ್ ಚಲಾಯಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈತ ಕಾಕಪೊರಾದವನಾಗಿದ್ದು, ಕಳೆದ ವರ್ಷವಷ್ಟೇ ಉಗ್ರ ಸಂಘಟನೆಯನ್ನು ಸೇರಿದ್ದ. ಸುಮಾರು 40 ಸಿಆರ್ ಪಿಎಫ್ ಸಿಬ್ಬಂದಿ ಇದ್ದ ಬಸ್ ಗೆ ಢಿಕ್ಕಿ ಹೊಡೆದ ಸ್ಕಾರ್ಪಿಯೋ ಕಾರಿನಲ್ಲಿ ಸುಮಾರು 350 ಕೆ.ಜಿ. ಸ್ಫೋಟಕಗಳಿತ್ತು ಎನ್ನಲಾಗಿದೆ.
19 ಸೈನಿಕರ ಸಾವಿಗೆ ಕಾರಣವಾದ 2016ರ ಉರಿ ಭಯೋತ್ಪಾದಕ ದಾಳಿಗಿಂತಲೂ ಭೀಕರ ದಾಳಿ ಇದಾಗಿದೆ. ದಾಳಿಯ ನಂತರ ಆದಿಲ್ ಅಹ್ಮದ್ ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story