ದಿಲ್ಲಿ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ, ರಾಹುಲ್
ಹೊಸದಿಲ್ಲಿ, ಫೆ.15: ನಿನ್ನೆ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರ ಪಾರ್ಥಿವ ಶರೀರ ದಿಲ್ಲಿಯ ಪಾಲಮ್ ವಿಮಾನ ನಿಲ್ದಾಣ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜ್ ನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಅಂತಿಮ ನಮನ ಸಲ್ಲಿಸಿದರು.
ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ಹುತಾತ್ಮ ಯೋಧರ ಪಾರ್ಥಿವ ಶರೀರಗಳನ್ನು ಕರೆತರಲಾಯಿತು. ನಾಳೆ ಎಲ್ಲಾ ಯೋಧರ ಮೃತದೇಹಗಳು ತವರನ್ನು ತಲುಪಲಿವೆ.
Next Story