ಹುತಾತ್ಮ ಯೋಧನ ಪಾರ್ಥಿವ ಶರೀರದ ಮುಂದೆ ಕೇಂದ್ರ ಸಚಿವ ಅಲ್ಫೊನ್ಸ್ ಸೆಲ್ಫಿ ..!
ತಿರುವನಂತಪುರ, ಫೆ.17: ಕೇಂದ್ರ ಪ್ರವಾಸೋದ್ಯಮ ರಾಜ್ಯ ಸಚಿವ ಅಲ್ಫೊನ್ಸ್ ಕಣ್ಣನ್ತನಮ್ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪುಲ್ವಾಮ್ ನಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದ ಕೇರಳದ ಹುತಾತ್ಮ ಯೋಧ ವಸಂತಕುಮಾರ್ ಪಾರ್ಥಿವ ಶರೀರದ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಚಿವರ ಈ ಘನ ಕಾರ್ಯವನ್ನು ಟೀಕಿಸಿದ್ದಾರೆ. ಸಾವಿನ ಮನೆಯಲ್ಲೂ ತನ್ನ ಕೆಟ್ಟ ಚಾಳಿಯನ್ನು ಬಿಡದ ಸಚಿವರ ವಿರುದ್ಧ ಸಾಮಾಜಿಕ ಚಾಲಾ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಚಿವ ಅಲ್ಪೋನ್ಸ್ ಸೆಲ್ಫಿ ಫೋಟೊವನ್ನು ಫೇಸ್ ಬುಕ್ ನಿಂದ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಸಚಿವ ಅಲ್ಪೋನ್ಸ್ ಸೆಲ್ಫಿ ಗೀಳಿನಿಂದಾಗಿ ಮುಖಕ್ಕೆ ಉಗಿಸಿಕೊಂಡದ್ದು ಇದು ಮೊದಲಲ್ಲ. ಕಳೆದ ವರ್ಷ ಪ್ರವಾಹದಿಂದಾಗಿ ಕೇರಳ ತತ್ತರಿಸಿದ್ದ ವೇಳೆ ಸಚಿವ ಅಲ್ಫೊನ್ಸ್ ಅವರು ಚಂಗನಸ್ಸೇರಿ ರಿಲೀಫ್ ಕ್ಯಾಂಪ್ ನಲ್ಲಿ ಚಾಪೆಯಲ್ಲಿ ನಿದ್ರಿಸುವ ಫೋಟೊವನ್ನು ಸಾಮಾಜಿಕ ಜಾಲಾತಾಣಗಳಿಗೆ ಅಪ್ಲೋಡ್ ಮಾಡಿದ್ದರು. ಸಚಿವರ ಈ ಕೃತ್ಯದ ವಿರುದ್ಧ ಟೀಕೆ ವ್ಯಕ್ತವಾದಾಗ ತಾನು ಈ ರೀತಿ ಮಾಡಿಲ್ಲ. ತನ್ನ ಸಹಾಯಕ ಫೋಟೊವನ್ನು ಕ್ಲಿಕ್ಕಿಸಿ ಫೇಸ್ ಬುಕ್ ಗೆ ಪೋಸ್ಟು ಮಾಡಿರುವುದಾಗಿ ಅವರು ಜಾರಿಕೊಂಡಿದ್ದರು.