ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ನನ್ನು ಹತ್ಯೆಗೈದ ಭಾರತೀಯ ಸೇನೆ ?
ಶ್ರೀನಗರ, ಫೆ.18: ಕಳೆದ ಗುರುವಾರ ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಯ ಮಾಸ್ಟರ್ಮೈಂಡ್ ಎನ್ನಲಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ರಶೀದ್ ಘಾಜಿ ಹಾಗೂ ಕಮ್ರಾನ್ನನ್ನು ಭಾರತೀಯ ಸೇನೆ ಸೋಮವಾರ ಬೆಳಗ್ಗೆ ನಡೆಸಿದ ದೀರ್ಘ ಕಾಲದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದೆ ಎನ್ನಲಾಗಿದೆ.
ಈ ಮೂಲಕ ಗುರುವಾರ ಭಾರತದ 40 ಯೋಧರ ಬಲಿ ಪಡೆದಿದ್ದ ದಾಳಿಯ ಸಂಚುಕೋರರನ್ನು ಸೇನೆ ಹೊಡೆದುರುಳಿಸಲು ಯಶಸ್ವಿಯಾಗಿದೆ ಎನ್ನಲಾಗಿದೆ. 9 ಗಂಟೆಗಳ ಕಾಲ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಿಂಗ್ಲಾನ ಪ್ರದೇಶದಲ್ಲಿ ಉಗ್ರರ ವಿರುದ್ಧ ನಡೆದಿರುವ ಎನ್ಕೌಂಟರ್ನಲ್ಲಿ ಮೇಜರ್ ಸಹಿತ ಐವರು ಯೋಧರು ಹುತಾತ್ಮರಾಗಿದ್ದಾರೆ.
ಅಡಗಿ ಕುಳಿತ್ತಿರುವ ಇನ್ನೂ ಕೆಲವು ಉಗ್ರರ ಪತ್ತೆಗಾಗಿ ಸೇನೆಯ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುತ್ತಿದೆ.
Next Story