ರಾಜನಾಥ್ರನ್ನು ಭೇಟಿಯಾದ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ
ಹೊಸದಿಲ್ಲಿ, ಫೆ. 20: ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಬುಧವಾರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಅಮೆರಿಕದಲ್ಲಿರುವ ಭಾರತದ ರಾಯಭಾರಿ ಹರ್ಷ ವರ್ಧನ್ ಶೃಂಗಾಲ್ ಕೂಡ ಗೃಹ ಸಚಿವರಿಗೆ ಕರೆ ಮಾಡಿದ್ದು, ದ್ವಿಪಕ್ಷೀಯ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಿಸಾರಿಯಾ ಹಾಗೂ ಸಿಂಗ್ ನಡುವಿನ ಭೇಟಿಯಲ್ಲಿ ಪುಲ್ವಾಮ ಭಯೋತ್ಪಾದಕ ದಾಳಿ ಕುರಿತು 20 ನಿಮಿಷಗಳ ಕಾಲ ಮಾತುಕತೆ ನಡೆಯಿತು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ ಬಿಸಾರಿಯಾ ಅವರನ್ನು ಹಿಂದೆ ಕರೆಸಿಕೊಳ್ಳಲಾಗಿತ್ತು. ಗೃಹ ಸಚಿವರೊಂದಿಗಿನ ಇಬ್ಬರು ರಾಯಭಾರಿಗಳ ಭೇಟಿ ಸೌಹಾರ್ದ ಭೇಟಿ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
Next Story