ಬಾಲಕಿಯ ಅತ್ಯಾಚಾರ, ಹತ್ಯೆ: ನಾಲ್ವರು ಆರೋಪಿಗಳ ಬಂಧನ
ಹೊಸದಿಲ್ಲಿ, ಮೇ. 4: ಸರಿತಾ ವಿಹಾರದಲ್ಲಿ ಫೆಬ್ರವರಿ 27ರಂದು ಗೋಣಿ ಚೀಲದಲ್ಲಿ ತುಂಬಿಸಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯ ಹತ್ಯೆಯ ನಿಗೂಢತೆಯನ್ನು ಭೇದಿಸಿರುವುದಾಗಿ ಹೇಳಿರುವ ದಿಲ್ಲಿ ಪೊಲೀಸರು ಈ ಸಂಬಂಧ ಸೋಮವಾರ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸೌರಭ್(19), ದಿನೇಶ್ (25), ರಹೀಮ್ (25) ಹಾಗೂ ಚಂದ್ರಶೇಖರ (30) ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಿಲ್ಲಿಯ ಸಂಗಮ್ ವಿಹಾರ್ ಪ್ರದೇಶದ ನಿವಾಸಿಗಳು. ಮುಖ್ಯ ಆರೋಪಿ ಧಿರೇಂದರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಹತ್ಯೆ ಪ್ರಕರಣವಲ್ಲದೆ, ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ. ಆರೋಪಿಗಳು ಬಾಲಕಿಯ ಕತ್ತು ಹಿಸುಕಿ ಹತ್ಯೆಗೈದಿರುವುದಕ್ಕೆ ಕುತ್ತಿಗೆಯಲ್ಲಿ ಕಲೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story