'ಚೌಕಿದಾರನ ಭಯ'ದಿಂದಲೇ ನೀರವ್ ಮೋದಿ, ಮಲ್ಯ ಪರಾರಿಯಾದರು ಎಂದ ಕೇಂದ್ರ ಸಚಿವ ಸುಪ್ರಿಯೋ
ಕೊಲ್ಕತ್ತಾ, ಮಾ.21: ‘ಚೌಕಿದಾರ್’ ಅಧಿಕಾರದಲ್ಲಿದ್ದಾರೆಂದು ಹಾಗು ಯಾವುದೇ ಯುಪಿಎ ನಾಯಕ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಗೊತ್ತಿದ್ದರಿಂದಲೇ ಕೆಲ ಭ್ರಷ್ಟ ಉದ್ಯಮಿಗಳು ಭಾರತದಿಂದ ಪರಾರಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.
“ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದೇಕೆ ಎಂದು ಕಾಂಗ್ರೆಸ್ ಕೇಳುತ್ತಿದೆ. ಕೇಂದ್ರದಲ್ಲಿ ‘ಚೌಕೀದಾರ್’ ಇದ್ದಾರೆ ಹಾಗು ತಮ್ಮನ್ನು ರಕ್ಷಿಸಲು ಯಾವುದೇ ಯುಪಿಎ ನಾಯಕರಿಲ್ಲ ಎಂದು ತಿಳಿದೇ ಅವರು ಪರಾರಿಯಾಗಿದ್ದಾರೆ” ಎಂದು ಸುಪ್ರಿಯೋ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
Next Story