ಮುಲಾಯಂ ಸಿಂಗ್ ಕ್ಷೇತ್ರ ಅಝಂಘಡದಿಂದ ಪುತ್ರ ಅಖಿಲೇಶ್ ಸ್ಪರ್ಧೆ
ಲಕ್ನೋ,ಮಾ.24: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅಝಂಘಡದಿಂದ ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಹಾಲಿ ಸಂಸದ ಮುಲಾಯಂ ಸಿಂಗ್ ಯಾದವ್ ಅವರು ಅಝಂಘಡ ಕ್ಷೇತ್ರವನ್ನು ತನ್ನ ಮಗ ಅಖಿಲೇಶ್ ಯಾದವ್ ಗೆ ಬಿಟ್ಟುಕೊಡುತ್ತಿದ್ದಾರೆ. ಮುಲಾಯಂ ಸಿಂಗ್ ಅವರು ಮೈನಿಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2014ರಲ್ಲಿ ಇದೇ ಕ್ಷೇತ್ರದಿಂದ ಮುಲಾಯಂಸಿಂಗ್ ಯಾದವ್ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ ಬಳಿಕ ಅವರು ಈ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಮ್ಪುರದ ಶಾಸಕರಾದ ಅಝಂ ಖಾನ್ ಅವರನ್ನು ರಾಮ್ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
Next Story