ಶತ್ರುಘ್ನ ಸಿನ್ಹಾ ಎಪ್ರಿಲ್ 6ರಂದು ಕಾಂಗ್ರೆಸ್ಗೆ
ಹೊಸದಿಲ್ಲಿ, ಮಾ. 28: ತಾನು ಶೀಘ್ರದಲ್ಲಿ ಕಾಂಗ್ರೆಸ್ ಸೇರಲಿದ್ದೇನೆ ಎಂದು ಬಿಜೆಪಿಯ ಬಂಡಾಯ ನಾಯಕ ಶತ್ರುಘ್ನ ಸಿನ್ಹ ಗುರುವಾರ ಹೇಳಿದ್ದಾರೆ. ಶತ್ರುಘ್ನ ಸಿನ್ಹಾ ಅವರು ಎಪ್ರಿಲ್ 6ರಂದು ಔಪಚಾರಿಕವಾಗಿ ಪಕ್ಷ ಸೇರಲಿದ್ದಾರೆ ಎಂದು ಕಾಂಗ್ರೆಸ್ನ ಬಿಹಾರದ ಉಸ್ತುವಾರಿ ಶಕ್ತಿಸಿನ್ಹ ಗೋಹಿಲ್ ತಿಳಿಸಿದ್ದಾರೆ.
ನವರಾತ್ರಿಯನ್ನು ಎಪ್ರಿಲ್ 6 ಹಾಗೂ ಎಪ್ರಿಲ್ 14ರ ನಡುವೆ ಆಚರಿಸಲಾಗುತ್ತದೆ. ಸಿನ್ಹ ಅವರು ಬಿಹಾರದ ಪಾಟ್ನಾ ಸಾಹೀಬ್ನಿಂದ ಎರಡು ಅವಧಿಗೆ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಹಲವು ಬಾರಿ ತನ್ನ ಪಕ್ಷದ ವಿರುದ್ಧವೇ ಟೀಕೆ ಮಾಡಿದ್ದರು. ಅಲ್ಲದೆ, ಪ್ರತಿಪಕ್ಷಗಳ ನಾಯಕರು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಾಟ್ನಾ ಸಾಹೀಬ್ ಕ್ಷೇತ್ರಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಮಾರ್ಚ್ 23ರಂದು ಕೇಂದ್ರ ಸಚಿವರ ರವಿಶಂಕರ್ ಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಅದೇ ದಿನ ಪ್ರತಿಕ್ರಿಯೆ ನೀಡಿದ ಸಿನ್ಹಾ, ಅವರು ‘‘ಹಿಂದಿರುಗಿಸಲು ಸಮರ್ಥರು’’ ಎಂದಿದ್ದರು. ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ಸಿನ್ಹಾ, ತಾನು ಕಾಂಗ್ರೆಸ್ ಸೇರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ನವರಾತ್ರಿ ಸಂದರ್ಭ ನಾನು ಸಕಾರತಾತ್ಮಕ ಸುದ್ದಿ ನೀಡಲಿದ್ದೇವೆ.’’ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ಗೆ ಸೇರಿದ ಬಳಿಕ ಪಾಟ್ನಾ ಸಾಹೀಬ್ನಿಂದ ಸ್ಪರ್ಧಿಸಲಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿನ್ಹಾ, ‘‘ಯಾವುದೇ ಸ್ಥಳ, ಪರಿಸರ ಒಂದೇ ಆಗಿರಲಿದೆ’’ ಮಾರ್ಮಿಕವಾಗಿ ನುಡಿದರು. ಸಿನ್ಹಾ ಅವರು ಪಕ್ಷದ ಸ್ಟಾರ್ ನಾಯಕ ಹಾಗೂ ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗೋಹಿಲ್ ಹೇಳಿದ್ದಾರೆ.