ಬಿಜೆಪಿ ಜೊತೆ ಮುನಿಸು: ‘ಮೈ ಹೂನ್ ಚೌಕೀದಾರ್’ ಕಾರ್ಯಕ್ರಮಕ್ಕೆ ಸುಮಿತ್ರಾ ಮಹಾಜನ್ ಗೈರು
ಪಕ್ಷದ ವಿರುದ್ಧವೇ ಲೋಕಸಭಾ ಸ್ಪೀಕರ್ ಅಸಮಾಧಾನ
ಭೋಪಾಲ್, ಎ.1: ಇಲ್ಲಿನ ಇಂದೋರ್ ಕ್ಷೇತ್ರದಿಂದ ಮರು ನಾಮನಿರ್ದೇಶನ ಮಾಡದೇ ಇರುವುದರಿಂದ ಅಸಮಾಧಾನಗೊಂಡಿರುವ ಲೋಕಸಭಾ ಸ್ಪೀಕರ್, ಇಂದೋರ್ ನ ಹಾಲಿ ಸಂಸದೆ ಸುಮಿತ್ರಾ ಮಹಾಜನ್ ಇಲ್ಲಿ ನಡೆದ ‘ಮೈ ಹೂನ್ ಚೌಕೀದಾರ್’ ಕಾರ್ಯಕ್ರಮದಲ್ಲಿ ಗೈರಾಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇಂದೋರ್ ನಲ್ಲಿ ಸುಮಿತ್ರಾ ಮಹಾಜನ್ ಸ್ಪರ್ಧಿಸಲಿದ್ದಾರೆಯೇ ಇಲ್ಲವೇ ಇನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. 8 ಬಾರಿ ಅವರು ಇಂದೋರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಸುಮಿತ್ರಾ ಮಹಾಜನ್ ಮಾತ್ರವಲ್ಲದೆ, ಮಾಜಿ ಸಚಿವ ಮಹೇಂದ್ರ ಹರ್ದಿಯಾ ಮತ್ತು ಶಾಸಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಪುತ್ರ ಆಕಾಶ್ ವಿಜಯವರ್ಗಿಯ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ತಮ್ಮ ಟ್ವಿಟರ್ ಖಾತೆಗಳ ಹೆಸರಿನ ಮುಂದೆ ‘ಚೌಕೀದಾರ್’ ಎಂದು ಹೆಸರು ಸೇರಿಸಿಕೊಳ್ಳದ ಬಿಜೆಪಿ ನಾಯಕರಲ್ಲಿ ಸುಮಿತ್ರಾ ಮಹಾಜನ್ ಕೂಡ ಒಬ್ಬರಾಗಿದ್ದಾರೆ.
Next Story