ಬೆಂಕಿಹಚ್ಚಿ ವಿದ್ಯಾರ್ಥಿನಿಯ ಕೊಲೆ
ತೃಶೂರ್, ಎ. 4: ವಿದ್ಯಾರ್ಥಿನಿಯೋರ್ವಳನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದ ಘಟನೆ ಕೇರಳದ ತೃಶೂರ್ ಜಿಲ್ಲೆಯ ಚಿಯಾರಂನಲ್ಲಿ ನಡೆದಿದೆ.
ನೀತು (22) ಕೊಲೆಯಾದ ವಿದ್ಯಾರ್ಥಿನಿಯಾಗಿದ್ದು, ಇಲ್ಲಿನ ವಡಕ್ಕೇಕ್ಕಾಡ್ ನಿವಾಸಿ ನಿತೀಶ್ (32) ಕೊಲೆ ಆರೋಪಿಯಾಗಿದ್ದಾನೆ.
ಕೊಡಕರ ಆ್ಯಕ್ಸಿಸ್ ಎಂಜಿನಿಯರಿಂಗ್ ಕಾಲೇಜ್ನ ವಿದ್ಯಾರ್ಥಿನಿಯಾಗಿದ್ದ ನೀತು ಇಂದು ಬೆಳಗ್ಗೆ ತನ್ನ ಮನೆಯಲ್ಲಿ ಕೊಲೆಯಾಗಿದ್ದು, ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ಜನರು ನಿತೀಶ್ನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Next Story