ಅಡ್ವಾಣಿಯವರನ್ನು ಭೇಟಿಯಾದ ಮುರಳಿ ಮನೋಹರ ಜೋಶಿ
ಕುತೂಹಲ ಸೃಷ್ಟಿಸಿದ ಟಿಕೆಟ್ ವಂಚಿತ ನಾಯಕರ ಮಾತುಕತೆ
ಹೊಸದಿಲ್ಲಿ, ಎ.5: ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಅವರು ಶುಕ್ರವಾರ ಪಕ್ಷದ ದಿಗ್ಗಜ ಎಲ್.ಕೆ.ಅಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆಗಳನ್ನು ನಡೆಸಿದರು. ಮಾತುಕತೆಯ ವಿವರಗಳನ್ನು ಉಭಯ ನಾಯಕರು ಬಹಿರಂಗಗೊಳಿಸಿಲ್ಲ.
ಲೋಕಸಭಾ ಚುನಾವಣೆಗಾಗಿ ಟಿಕೆಟ್ ವಂಚಿತರಾಗಿರುವ ಹಿರಿಯ ಬಿಜೆಪಿ ನಾಯಕರಲ್ಲಿ ಅಡ್ವಾಣಿ ಮತ್ತು ಜೋಶಿ ಸೇರಿದ್ದಾರೆ.
ಬಿಜೆಪಿಯು ಎಂದೂ ತನ್ನ ರಾಜಕೀಯ ಎದುರಾಳಿಗಳನ್ನು ‘ದೇಶದ್ರೋಹಿಗಳು’ ಅಥವಾ ‘ಶತ್ರುಗಳು’ಎಂದು ಪರಿಗಣಿಸಿರಲಿಲ್ಲ ಎಂದು ಅಡ್ವಾಣಿ ಅವರು ಗುರುವಾರ ಹೇಳಿದ್ದು, ಬಾಲಕೋಟ್ ವಾಯು ದಾಳಿಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ರಾಷ್ಟ್ರವಿರೋಧಿ ಎಂಬ ಕಟೂಕ್ತಿಯೊಂದಿಗೆ ಪ್ರತಿಪಕ್ಷಗಳ ವಿರುದ್ಧ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
Next Story