ಬೆಳೆ ವೈಫಲ್ಯದಿಂದ ನೊಂದ ಯುವರೈತ ಆತ್ಮಹತ್ಯೆಗೆ ಶರಣು
ಯವತ್ಮಾಲ್,ಎ.7: ಬೆಳೆ ವೈಫಲ್ಯದಿಂದ ನೊಂದಿದ್ದ ಯುವರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯವತ್ಮಾಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ರಾಲೇಗಾಂವ್ ತಾಲೂಕಿನ ವಡಗಾಂವ್ ನಿವಾಸಿ ಶ್ರೀಜಿತ್ ವಿಲಾಸರಾವ ಹಾಥೆ(24) ಮೃತ ರೈತನಾಗಿದ್ದು,ಆತ್ಮಹತ್ಯೆಗೆ ಕಾರಣವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಹಾಥೆ ನಾಲ್ಕು ಎಕರೆ ಕೃಷಿಭೂಮಿಯನ್ನು ಹೊಂದಿದ್ದ,ಆದರೆ ಪ್ರತಿ ವರ್ಷ ಬೆಳೆ ವೈಫಲ್ಯದಿಂದಾಗಿ ಒತ್ತಡದಲ್ಲಿದ್ದ ಎಂದು ಮೃತನ ಬಂಧುವೋರ್ವರು ಹೇಳಿದರು.
ಹಾಥೆಯ ತಂದೆ ಕೂಡ ಕಳೆದ ವರ್ಷ ಜಮೀನಿನಲ್ಲಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವಸಂತರಾವ್ ನಾಯಕ್ ಶೇತಕರಿ ಸ್ವಾವಲಂಬನ ಮಿಷನ್ನ ಅಧ್ಯಕ್ಷ ಕಿಶೋರ ತಿವಾರಿ ಅವರು ತಿಳಿಸಿದರು.
Next Story