ಓಟಿಗಾಗಿ ಉಗ್ರ ಪ್ರತ್ರ್ಯೇಕತಾವಾದಿಗಳ ಜೊತೆ ಬಿಜೆಪಿ ದೋಸ್ತಿ !
ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಯಿತು ಪಕ್ಷದ ದೇಶಪ್ರೇಮ
ಮಣಿಪುರ, ಎ.8: ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಅಥವಾ ಶಿಕ್ಷೆಯನ್ನು ಎದುರಿಸಲು ತಯಾರಾಗಿ….. ಇದು ಮಣಿಪುರದಲ್ಲಿ ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪೊಂದು ಮತದಾರರಿಗೆ ಒಡ್ಡಿದ ಬೆದರಿಕೆ. ಇಷ್ಟೇ ಅಲ್ಲದೆ ಬಿಜೆಪಿಯು ಇನ್ನೊಂದು ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪು ಹೆಸರಿಸಿದ್ದ ಅಭ್ಯರ್ಥಿಗೆ ಟಿಕೆಟ್ ನೀಡಿದೆ ಎನ್ನುವ ಬಗ್ಗೆಯೂ ವ್ಯಾಪಕ ಚರ್ಚೆಗಳಾಗುತ್ತಿವೆ.
“ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪೊಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ಪತ್ರ ಬರೆದಿದ್ದು, ಔಟರ್ ಮಣಿಪುರದಿಂದ ಎಚ್.ಎಸ್. ಬೆಂಜಮಿನ್ ಮೇಟ್ ಗೆ ಟಿಕೆಟ್ ನೀಡಿದರೆ ಕೃತಜ್ಞನಾಗಿ ಇರುವುದಾಗಿ ತಿಳಿಸಿದೆ” ಎಂದು ರವಿ ನಾಯರ್ ಎಂಬವರು ಟ್ವೀಟ್ ಮಾಡಿದ್ದು, ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪು ಅಮಿತ್ ಶಾಗೆ ಬರೆದದ್ದು ಎನ್ನಲಾದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.
“ಈಶಾನ್ಯ ರಾಜ್ಯದ ಮತ್ತೊಂದು ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪು ಕುಕಿ ನ್ಯಾಶನಲ್ ಆರ್ಮಿ ಗ್ರಾಮದ ಮುಖ್ಯಸ್ಥರನ್ನು ಬೆದರಿಸಿದೆ. ಔಟರ್ ಮಣಿಪುರ್ ನಿಂದ 90 ಶೇ. ಮತಗಳು ಬಿಜೆಪಿಗೆ ಬೀಳದಿದ್ದಲ್ಲಿ, ಗ್ರಾಮದ ಮುಖ್ಯಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಬೆದರಿಸಲಾಗಿದೆ. ‘ದೇಶ ಮೊದಲು’, ‘ನಾವು ಭಯೋತ್ಪಾದನೆಯನ್ನು ಅಳಿಸಿ ಹಾಕುತ್ತೇವೆ”, ‘ಅಖಂಡ್ ಭಾರತ್’ ಎನ್ನುವ ಬಿಜೆಪಿ ನಾಯಕರ ನಿಜವಾದ ಮುಖಗಳಿವು” ಎಂದವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸ್ಥಳೀಯ ವೆಬ್ ಸೈಟ್ ಗಳೂ ಈ ಬಗ್ಗೆ ವರದಿ ಮಾಡಿದೆ.
1/ An armed insurgent outfit in Manipur wrote to BJP president Amit Shah informing him that the outfit would be greatful if H S Benjamin Mate is fielded as BJP candidate from outer Manipur.
— Ravi Nair (@t_d_h_nair) April 7, 2019
Our "nation first party" obliged the request gleefully.
Story didn't end there pic.twitter.com/AdL5gnnl2s