ಮುಂಬೈಯಲ್ಲಿ ಊರ್ಮಿಳಾ ಮಾತೋಂಡ್ಕರ್, ಪ್ರಿಯಾ ದತ್ ನಾಮಪತ್ರ ಸಲ್ಲಿಕೆ
ಮುಂಬೈ, ಎ. 8: ನಾಲ್ಕನೇ ಹಂತದ ಮಹಾರಾಷ್ಟ್ರ ಲೋಕಸಭಾ ಚುನಾವಣೆಗೆ ಮುಂಬೈ ಕಾಂಗ್ರೆಸ್ ವರಿಷ್ಠ ಮಿಲಿಂದ್ ದಿಯೋರ, ಪಕ್ಷದ ಅಭ್ಯರ್ಥಿಗಳಾದ ಊರ್ಮಿಳಾ ಮಾತೋಂಡ್ಕರ್, ಪ್ರಿಯಾ ದತ್ ಹಾಗೂ ಶೀವಸೇನೆಯ ಅರವಿಂದ್ ಸಾವಂತ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಮಾತೋಂಡ್ಕರ್ ಮೋಟರ್ಸೈಕಲ್ನಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅವರು ಮುಂಬೈ ಈಶಾನ್ಯ ಕ್ಷೇತ್ರದಿಂದ ಬಿಜೆಪಿಯ ಗೋಪಾಲ ಶೆಟ್ಟಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪ್ರಿಯಾ ದತ್ ತನ್ನ ಸಹೋದರ ಸಂಜಯ್ ದತ್ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಅವರು ಮುಂಬೈ ಉತ್ತರ ಕೇಂದ್ರ ಕ್ಷೇತ್ರದಿಂದ ಬಿಜೆಪಿಯ ಪೂನಂ ಮಹಾಜನ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಮುಂಬೈ ನಗರ ಕಾಂಗ್ರೆಸ್ ವರಿಷ್ಠ ಸಂಜಯ್ ನಿರುಪಮ್ ಮುಂಬೈ ಉತ್ತರ ವಾಯುವ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಅವರು ಶಿವಸೇನೆಯ ಗಜಾನನ್ ಕೀರ್ತಿಕಾರ್ ವಿರುದ್ಧ ಸ್ಪರ್ಧಿಸಲಿದ್ದಾರೆ. ದಿಯೋರಾ ಹಾಗೂ ಸಾವಂತ್ ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ.
ಬಿಜೆಪಿ ನಾಯಕ ರಾಜ್ ಪುರೋಹಿತ್ ಅವರೊಂದಿಗೆ ಆಗಮಿಸಿದ ಸಾವಂತ್ ನಾಮಪತ್ರ ಸಲ್ಲಿಸಿದರು. ಸೇನಾ ನಾಯಕ ರಾಹುಲ್ ಶವಾಲೆ ಮುಂಬೈ ದಕ್ಷಿಣ ಕೇಂದ್ರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಅವರು ಕಾಂಗ್ರೆಸ್ನ ಏಕಾಂತ್ ಗಾಯಕ್ವಾಡ್ ಅವರನ್ನು ಎದುರಿಸಲಿದ್ದಾರೆ. ನಾಲ್ಕನೇ ಹಂತದ ಚುನಾವಣೆಯ ನಾಮಪತ್ರ ಹಿಂದೆಗೆಯಲು ಕೊನೆಯ ದಿನಾಂಕ ಎಪ್ರಿಲ್ 1. ಮತದಾನ ಎಪ್ರಿಲ್ 29ರಂದು ನಡೆಯಲಿದೆ.